ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ : ಹೈಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿ ಸಿದ ಎಸ್ಐಟಿ
ಬೆಂಗಳೂರು (hairamanagara.in) : ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಅತ್ಯಾ ಚಾರ ಆರೋಪ ಪ್ರ ಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಹೈಕೋರ್ಟ್ಗೆ ಮಧ್ಯಂತರ ವರದಿ ಸಲ್ಲಿ ಸಿದೆ.
ಸಂತ್ರ ಸ್ತೆ ಯುವತಿ ಕಬ್ಬ ನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಅನ್ವ ಯ ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ನಡೆಸಿದ್ದು , ದೂರು ಸಲ್ಲಿಸುವಾಗ ಆಕೆ ನೀಡಿದ ಹೇಳಿಕೆಗೂ ಹಾಗೂ ತನಿಖೆ ನಡೆಸುವಾಗ ನೀಡಿರುವ ಹೇಳಿಕೆಗಳು ವಿಭಿನ್ನ ವಾಗಿವೆ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರ ಕರಣ ಸಂಬಂಧ ಹಲವು ಸಾಕ್ಷಿ ಗಳ ವಿಚಾರಣೆ ನಡೆಸಲಾಗಿದ್ದು , ಪ್ರ ಕರಣದಲ್ಲಿ ಓರ್ವಮಾಜಿ ಶಾಸಕನನ್ನು ಸಾಕ್ಷಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಂತ್ರ ಸ್ತೆಯ ಹಿನ್ನೆ ಲೆ ಕೆದಕಿದ ಎಸ್ಐಟಿ ತಂಡದೂರು ನೀಡುವಾಗ ಸಂತ್ರಸ್ತೆ ಖಾಸಗಿ ಕಂಪೆನಿಯೊಂದರಲ್ಲಿ ಟೆಲಿಕಾಲರ್ ಎಂದು ಹೇಳಿದ್ದಳು. ತನಿಖೆ ಸಂದರ್ಭದಲ್ಲಿ ಸಂತ್ರ ಸ್ತೆ ಕೆಲಸಮಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಮತ್ತೊಂ ದೆಡೆ ಇಂಜಿನಿಯರಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದ ಸಂತ್ರ ಸ್ತೆ ವಿಚಾರಣೆ ನಡೆಸಿದಾಗ ಇಂಜಿನಿಯರಿಂಗ್ ಪೂರ್ಣವಾಗದೆ, ಈವರೆಗೆ ಸುಮಾರು 22 ವಿಷಯಗಳಲ್ಲಿ ನಪಾಸು ಆಗಿದ್ದಾಳೆ ಎಂಬುದು ತಿಳಿದು ಬಂದಿದೆ. ಅತ್ಯಾ ಚಾರ ಆರೋಪ ಸಂಬಂಧ ಎಸ್ಐಟಿ ಸಂತ್ರ ಸ್ತೆಯನ್ನ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ವೈದ್ಯರು ನೀಡಿದ ವರದಿಯನ್ನು ಸಹ ಮಧ್ಯಂತರ ವರದಿಯ ಜೊತೆ ಸಲ್ಲಿಕೆ ಮಾಡಲಾಗಿದೆ. ವೈದ್ಯ ರು ನೀಡಿದ ವರದಿಯಲ್ಲಿ ಅತ್ಯಾಚಾರ ಮಾಡಿರುವ ಯಾವ ಕುರುಹುಗಳಿಲ್ಲ.
ದೈಹಿಕವಾಗಿಯೂ ಯಾವುದೇ ಕುರುಹುಗಳು ಕಾಣಿಸಿಲ್ಲ . ಇದೇ ವರದಿಯನ್ನ ಆಧಾರವಾಗಿಟ್ಟು ಕೊಂಡು ಮತ್ತಷ್ಟು ವಿಚಾರಣೆ ನಡೆಸಿದ ಅಧಿಕಾರಿಗಳು ಈ ಹಿಂದೆ ವ್ಯಕ್ತಿ ಓರ್ವನ ಜತೆ ದೈಹಿಕ ಸಂಪರ್ಕ ನಡೆಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಪರಿಚಿತನನ್ನ ಕರೆಯಿಸಿ ವಿಚಾರಣೆ ನಡೆಸಿ ಎಸ್ಐಟಿ ಹೇಳಿಕೆ ದಾಖಲಿಸಿದೆ.
ಎಸ್ಐಟಿಗೆ ವಿಚಾರಣೆ ವೇಳೆ ಮತ್ತೊಂದು ಸ್ಫೋ ಟಕಮಾಹಿತಿ ಒದಗಿ ಬಂದಿದೆ. ಹನಿಟ್ರ್ಯಾ ಪ್ಮಾಡಲು ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಹ್ಯಾಕರ್ ಸ್ನೇಹಿತೆಯನ್ನ ವಿಚಾರಣೆ ನಡೆಸಿರುವ ಎಸ್ಐಟಿ, ಆಕೆಗೆ ಹ್ಯಾಕರ್ ಒಂದು ದೊಡ್ಡ ಅಪರೇಷನ್ ಮಾಡುತ್ತಿದ್ದೇನೆ. ಹೀಗಾಗಿ, ನ್ಯೂಡ್ ಫೋಟೋಸ್ ಕಳಿಸುವಂತೆ ಕೇಳಿದ್ದನಂತೆ. ಹ್ಯಾಕರ್ ಗೆ ಗೆಳತಿ ಬೆಂಬಲಿಸದೆ ಇರುವುದು ವರದಿಯಲ್ಲಿ ಉಲ್ಲೇ ಖವಾಗಿದೆ ಎನ್ನಲಾಗಿದೆ.
ಟ್ರ್ಯಾಪ್ ಮಾಡಲೆಂದೆ ಎಸ್ಪಿ ರೋಡಿನಲ್ಲಿ ಕ್ಯಾಮೆರಾ ಸಹ ಖರೀದಿಮಾಡಿದ್ದರು. ಲಾಕ್ಡೌನ್ ಇದ್ದ ಹಿನ್ನೆ ಲೆ ಕರೆಮಾಡಿ ಕ್ಯಾ ಮೆರಾ ಬೇಕೆಂದು ಕೇಳಿದ್ದರಿಂದ ಮೈಸೂರು ಬ್ಯಾಂಕ್ ಬಳಿ ಬಂದು ಅಂಗಡಿ ಮಾಲಕ ನೀಡಿದ್ದಾನೆ. ಆನ್ಲೈನ್ ಮೂಲಕ ಕ್ಯಾ ಮೆರಾಗೆ ಪೇಮೆಂಟ್ ಸಹ ಮಾಡಲಾಗಿದೆ. ಪೇಮೆಂಟ್ ಮಾಡಿದ್ದಕ್ಕೆ ಎಸ್ಐಟಿ ದಾಖಲಾತಿಗಳನ್ನು ಕಲೆ ಹಾಕಿದೆ.