ಸರ್ಕಾರಗಳು ನಮ್ಮಂತಹ ಅಪರೂದ ಕಲಾವಿದರನ್ನು ಗುರುತಿಸಲಿಲ್ಲ : ಗೊರವರ ಕುಣಿತದ ಹಿರಿಯ ಕಲಾವಿದ ಟಿ. ಆಂಜನಪ್ಪ ಬೇಸರ
ರಾಮನಗರ : ಸರ್ಕಾರಗಳು ನಮ್ಮಂತಹ ಅಪರೂಪದ ಕಲಾವಿದರನ್ನು ಗುರುತಿಸಿ ವೇದಿಕೆ ನೀಡಲಿಲ್ಲ ಎಂದು ಗೊರವರ ಕುಣಿತದ ಹಿರಿಯ ಕಲಾವಿದ ಟಿ. ಆಂಜನಪ್ಪ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಗೌರವ-ಮಾತುಕಥೆ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನವರು ನಮ್ಮಂತಹ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನನಗೆ ಸಂತೋಷವನ್ನು ಉಂಟು ಮಾಡಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಟಿ.ಆಂಜಿನಪ್ಪ ಮೈಲಾರಲಿಂಗನ ಕುರಿತು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಗೊರವರ ಕುಣಿತ, ಬೀರದೇವರ ಹಾಡು, ಕಥೆಗಳನ್ನು ಹೇಳಿದರು. ಗೊರವರ ವೇಷಭೂಷಣಗಳನ್ನು ಪರಿಚಯ ಮಾಡಿಕೊಟ್ಟರು.

ಕಲಾವಿದರಿಗೆ ಜಾನಪದ ಲೋಕ ದೇವಲೋಕ ಇದ್ದಂತೆ : ಎಂ.ಎನ್. ಹರೀಶ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಹರೀಶ್ ಮಾತನಾಡಿ ರಾಮನಗರ ಜಿಲ್ಲೆ ಜಾನಪದ ಕಲೆಗಳ ತವರೂರು, ಜಾನಪದ ಲೋಕ ಜಾನಪದ ಕಲಾವಿದರಿಗೆ ದೇವಲೋಕ ಇದ್ದಂತೆ. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಜಿನಿಯರ್ಗಳನ್ನು ಸೃಷ್ಠಿಸುವ ಜೊತೆಗೆ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳ ಪರಿಚಾರಕರನ್ನು ಸೃಜಿಸಬೇಕಿದೆ. ನಮ್ಮ ಸಂಸ್ಕೃತಿ ನಮ್ಮ ಪರಂಪರೆಯೇ ನಮ್ಮ ಶ್ರೀಮಂತಿಕೆ. ಶಾಲಾ ಕಾಲೇಜುಗಳಲ್ಲಿ ಗಣಕವಿಜ್ಞಾನ, ಜೈವಿಕವಿಜ್ಞಾನ, ಜೈವಿಕ ತಂತ್ರಜ್ಞಾನ ವಿಷಯಗಳಿದ್ದಂತೆ ಜಾನಪದವೂ ಒಂದು ವಿಷಯವಾಗಿ ಪಠ್ಯಕ್ರಮದಲ್ಲಿ ಬರಬೇಕಿದೆ. ಇದರಿಂದ ಜಾನಪದ ಉಳಿಯುತ್ತದೆ ಎಂದರು.
ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಪುಂಡರೀಕ ಮಾತನಾಡಿ ಕರ್ನಾಟಕ ಜಾನಪದ ಪರಿಷತ್ತು ಕಳೆದ ಆರು ವರ್ಷಗಳಿಂದ ನಿರಂತರವಾಗಿ ವಿಶೇಷ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಮತ್ತು ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ತುಂಬಾ ಸಂತೋಷವಾಗಿದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಸಂಗೀತ, ನೃತ್ಯ,ಚಿತ್ರಕಲೆ ಶಿಕ್ಷಕರಿದ್ದಂತೆ ಜಾನಪದ ಬೋಧನೆ ಮಾಡಲು ಜಾನಪದ ಶಿಕ್ಷಕರು ಇರಬೇಕು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಜಾನಪದವನ್ನು ಮುಖ್ಯ ವಿಷಯವಾಗಿ ಸೇರಿಸಿದರೆ ವಿದ್ಯಾರ್ಥಿಗಳಿಗೆ ಒಂದು ವೃತ್ತಿಯನ್ನಾಗಿ ಸ್ವೀಕರಿಸಲು ಸಹಕಾರಿಯಾಗುತ್ತದೆ ಎಂದರು.
ಕ್ಯೂರೇಟರ್ ಡಾ.ಯು.ಎಂ. ರವಿ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಂಗಸಹಾಯಕರಾದ ಪ್ರದೀಪ್.ಎಸ್ ನಿರೂಪಿಸಿದರು. ರಾಮನಗರ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಸು.ತರಾಮೇಗೌಡ, ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಿಜಿಸ್ಟ್ರಾರ್ ವೆಂಕಟೇಶಮೂರ್ತಿ, ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ತುಳಸಿಮಾಲ ಕೆ, ಸಾಹಿತಿಗಳಾದ ವಿಜಯರಾಂಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಸಿಂ.ಲಿಂ ನಾಗರಾಜು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಕಲಾವಿದರು ಹಾಗೂ ಜಾನಪದಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗೊರವರ ಕುಣಿತದ ಹಿರಿಯ ಕಲಾವಿದ ಟಿ. ಆಂಜನಪ್ಪ ಕಿರು ಪರಿಚಯ :
ಕರ್ನಾಟಕದ ಧಾರ್ಮಿಕ ವೃತ್ತಿ ಗಾಯಕರುಗಳಲ್ಲಿ ಗೊರವರದು ಪ್ರಧಾನ ಪರಂಪರೆ. ಗೊರವರು ಮೈಲಾರಲಿಂಗನ ಪರಮ ಭಕ್ತರು. ಗೊರವರನ್ನು ದಕ್ಷಿಣಕರ್ನಾಟಕದಲ್ಲಿ ಗೊರವ, ಗೊಗ್ಗಯ್ಯ, ಗಗ್ಗಯ್ಯ, ಗೊಡಬಡಯ್ಯ ಎಂದು ಕರೆಯುತ್ತಾರೆ. ತಲೆಗೆಕರಡಿ ಕೂದಲಿನ ಕುಲಾವಿ, ಎದೆಯ ಮೇಲೆ ಕವಡೆ ಸರದಅಡ್ಡ ಪಟ್ಟಿ ಧರಿಸಿ ಕರಿಯ ನಿಲುವಂಗಿಯನ್ನು ಉಟ್ಟಿರುತ್ತಾರೆ. ಜೋಗಿಗೆ, ದೋಣಿ, ಭಂಡಾರಬಕ್ಸ, ಗಂಟೆತ್ರಿಶೂಲ, ನಾಗಬೆತ್ತ, ಡಮರು ಇವುಗಳು ಗೊರವರ ಸಾಮಾನ್ಯ ವೇಶಭೂಷಣಗಳು. ಹಬ್ಬ, ಜಾತ್ರೆಅಥವಾ ಸಾರ್ವಜನಿಕವಾಗಿ ಪ್ರದರ್ಶಿಸುವ ಗೊರವರಕುಣಿತ ನೋಡುಗರಿಗೆ ಮೆರಗು ನೀಡುತ್ತವೆ. ಅವರ ವೇಷಗಳೇ ನಿಂತು ನೋಡುವಂಥವು. ದೈವದ ಸ್ತುತಿ ಮಾಡುವ ಮೊದಲು ಹಿರಿಯಗೊರವ ಪಿಳ್ಳಂಗೋವಿ ಊದಿ ತನ್ನಡಮರುಗವನ್ನು ನುಡಿಸುತ್ತಾ ನಿಲ್ಲುತ್ತಾನೆ. ನಂತರಒಟ್ಟಾಗಿದೈವದ ಸ್ತುತಿಆರಂಭವಾಗುತ್ತದೆ. ತಂಡದವರೆಲ್ಲಡಮರುಗವನ್ನು ನುಡಿಸುತ್ತಾಡಮರುಗದ ಸದ್ದಿಗೆ ತಕ್ಕಂತೆ ಮುಂದ್ಹೆಜ್ಜೆ, ಹಿಂದ್ಹೆಜ್ಜೆ ಹಾಕುತ್ತಾಕುಣಿತಆರಂಭಿಸುತ್ತಾರೆ. ಮಧ್ಯೆ ಮಧ್ಯೆತಲೆಗೆ ಹಾಕಿದಕರಡಿಕೂದಲಿನ ಜುಂಜನ್ನುತೆಗೆದು ಮುಂದೆಚಾಚಿ ತೋರಿಸಿದಂತೆ ಮಾಡಿ ಮತ್ತೆಧರಿಸುತ್ತಾರೆ. ಆವೇಷಗೊಂಡಂತೆ ಹಿಂದೆ ಮುಂದೆತಿರುಗಿಗಿರಕಿ ಹೊಡೆದಂತೆಕುಣಿಯುತ್ತಾ ಮಂಡಲಾಕಾರದಲ್ಲಿ ಸುತ್ತುತ್ತಾರೆ. ಕುಣಿತಕ್ಕಿಂತ ಮುಖ್ಯವಾದದ್ದುಅವರಕಥಾ ನಾಯಕಮೈಲಾರಲಿಂಗನಕುರಿತು ಹಾಡುವುದು.
50 ವರ್ಷಗಳಿಂದ ಪ್ರದರ್ಶನ ನೀಡುತ್ತಿರುವ ಟಿ. ಆಂಜನಪ್ಪ :
ಈ ಕಲೆಯಲ್ಲಿತಮ್ಮನ್ನು ತೊಡಗಿಸಿಕೊಂಡು ಕಳೆದ ಐವತ್ತು ವಸಂತಗಳಿಂದ ಕಲಾಪ್ರದರ್ಶನಗಳನ್ನು ನೀಡುತ್ತಿರುವಕಲಾವಿದ ಶ್ರೀ ಟಿ.ಆಂಜಿನಪ್ಪ. ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರುತಾಲ್ಲೂಕಿನ ನಗರಗೆರೆಗ್ರಾಮದಲ್ಲಿ 1950ರಲ್ಲಿ ಜನಿಸಿದರು. ತಂದೆರಾಮಯ್ಯ, ತಾಯಿ ನಾಗಮುದ್ದಮ್ಮ. ಕಲೆ ವಂಶಪರಂಪರೆಯಿಂದ ಬಂದಿದ್ದುತಾತ ಮುತ್ತಾತರುಕಲಾವಿದರಾಗಿದ್ದರು. ಹೂವಿನಹಡಗಲಿ ತಾಲ್ಲೂಕಿನ ಹಿರೇಮೈಲಾರದ ಗುರುಗಳಾದ ಜಯಚಂದ್ರಒಡೆಯರ್ ಸ್ವಾಮಿಗಳು ಮತ್ತುಕಾಡಪ್ಪಒಡೆಯರ್ಇವರ ಬಳಿ ಕಲೆಯನ್ನುತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕಲಿತು ಗುರುಗಳ ಕುದುರೆಯ ಹಿಂದೆ ಬಿಲ್ಲಾಜವಾನನಾಗಿ ಸುತ್ತೇಳು ಜಿಲ್ಲೆಗಳಲ್ಲಿ ಸುತ್ತಿ ಕಲೆ ಪ್ರದರ್ಶನಗಳನ್ನು ನೀಡಿದ್ದಾರೆ. ಮುಡುಕುತೊರೆ, ಐನಗುಡಿ, ನಾಗಮಂಗಲದ ಮೈಲಾರಪಟ್ನ, ಬೆಂಗಳೂರು ಸಂಪಂಗಿರಾಮನಗರ, ಮಾದೇಶ್ವರ ಬೆಟ್ಟ ಸೇರಿದಂತೆ ಸಾವಿರಾರುಜಾತ್ರೆ, ಹಬ್ಬ, ಉತ್ಸವಗಳಲ್ಲಿ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥವಾಗಿ ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಲೋಕಸಿರಿ-72ರ ತಿಂಗಳ ಅತಿಥಿಕಾರ್ಯಕ್ರಮದಲ್ಲಿಗೌರವಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com
ನೆರವು ನೀಡಿ :
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ವಸ್ತುನಿಷ್ಠ, ವರದಿ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ. ಗೂಗಲ್ ಪೇ ಅಥವಾ ಪೋನ್ ಪೇ ಮಾಡಿ – 9880439669 (Rudreshwara S)