ಅಪಘಾತದಲ್ಲಿ ಪತ್ರಕರ್ತ ರವಿ ಸಾವು

ರಾಮನಗರ : ನಗರದ ಲೋಕೋಪಯೋಗಿ ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ ಗ್ಯಾಸ್‌ ರವಿ (50) ಸಾವನ್ನಪ್ಪಿದರು.

ರವಿ ಮಂಗಳವಾರ ಮಧ್ಯಾಹ್ನ ಬೈಕ್‌ನಲ್ಲಿ ಹೆದ್ದಾರಿ ದಾಟುವ ಯತ್ನದಲ್ಲಿದ್ದ ವೇಳೆ ಹಿಂಬದಿಯಿಂದ ಟಾಟಾ ಏಸ್‌ ವಾಹನ ಡಿಕ್ಕಿಯಾಯಿತು. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ರವಿ ಸ್ಥಳದಲ್ಲೇ ಸಾವನ್ನಪ್ಪಿದರು. ಬೈಕ್‌ನಲ್ಲಿದ್ದ ನಾರಾಯಣ ಸ್ವಾಮಿ ಎಂಬುವರಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿ ಪ್ರಸ್ತುತ ಹೊಸ ಆದರ್ಶ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಪತ್ನಿ ಉಮಾ, ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಂಗಳವಾರ ಸಂಜೆ ನಗರದ ಎಪಿಎಂಸಿ ಬಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

Leave a Reply

Your email address will not be published. Required fields are marked *